Emergency contact numbers |
|
Police (from landline) | 100 |
Fire brigade | 101 |
Ambulance | 102 |
Police (from mobile) | 112 |
Railway Enquiry | 131 |
Passenger Reservation | 132 |
Indian Airlines: General Enquiry | 140 |
Telephone Directory Enquiry | 197 |
Local Assistance | 199 |
Women in Distress | 1020 |
Heart Attack | 1050 |
Heart Brigade | 1051 |
AIDS Control Centre | 1097 |
Child Labour complaint Old age help line anti courreption Help Line | 1098 |
CATS | 1099 |
IVRS (English) | 1361 |
IVRS (Hindi) | 1363 |
Blood Bank | 1910 |
eye bank helpline | 1919 |
other toll free numbers |
|
Aavin | 1800 44 3300 |
ABN AMRO | 1800 11 2224 |
ABT Courier | 1800 44 8585 |
Adrenalin | 1800 444 445 |
AFL Wizz | 1800 22 9696 |
Agarwal Packers & Movers | 1800 11 4321 |
Air India | 1800 22 7722 |
Aiwa/Sony | 1800 11 1188 |
AMD | 1800 425 6664 |
AMP Sanmar | 1800 44 2200 |
Anchor Switches | 1800 22 7979 |
Anti Courreption Help Line ( State Vigilance Bureau, Haryana) | 1800 180 2022 |
APC | 1800 44 4272 |
Apple Computers | 1800 444 683 |
Asian Paints Home Solutions | 1800 22 5678 |
Asian Sky Shop | 1800 22 1800 |
Associated Packers P Ltd | 1800 21 4560 |
Aviva | 1800 33 2244 |
Bajaj Allianz | 1800 22 5858 |
BenQ | 1800 22 08 08 |
Berger Paints Home Decor | 1800 33 8800 |
Best on Health | 1800 11 8899 |
Bird CellPhones | 1800 11 7700 |
Blue Star | 1800 22 2200 |
Bose Audio | 1800 11 2673 |
Bru Coffee Vending Machines | 1800 44 7171 |
CAMS | 1800 44 2267 |
Canara Bank | 1800 44 6000 |
Canon | 1800 333 366 |
Changed number Announcement | 1961 (or) 1962 |
Chola MS General Insurance | 1800 44 5544 |
Chola Mutual Fund | 1800 22 2300 |
Cisco Systems | 1800 221 777 |
Citibank | 1800 44 2265 |
Club Mahindra Holidays | 1800 33 4539 |
Compaq - HP | 1800 444 999 |
Consumer Helpline | 1800 11 4000 |
Corporatin Bank | 1800 443 555 |
Cox & Kings | 1800 22 1235 |
Daikin Air Conditioners | 1800 444 222 |
Data One Broadband | 1800 424 1800 |
Dell | 1800 444 026 |
Development Credit Bank | 1800 22 5769 |
DHL | 1800 111 345 |
DishTV | 1800 180 3474 |
Domino’s Pizza | 1800 111 123 |
Dr Batras | 1800 11 6767 |
Easy IPO’s | 3030 5757 |
Edu Plus | 1800 444 000 |
Epson | 1800 44 0011 |
eSys | 3970 0011 |
Faber Chimneys | 1800 21 4595 |
FedEx | 1800 22 6161 |
Fidelity Investments | 1800 180 8000 |
Franklin Templeton Fund | 1800 425 4255 |
Genesis Tally Academy | 1800 444 888 |
GlaxoSmithKline | 1800 22 8797 |
God TV Tours | 1800 442 777 |
Godrej | 1800 22 5511 |
Goel Packers & Movers | 1800 11 3456 |
GRT Grand | 1800 44 5500 |
Grundfos Pumps | 1800 33 4555 |
HCL | 1800 180 8080 |
HDFC bank | 1800 224 060 |
HDFC credit card | 1800 425 4332 |
HDFC Standard Life | 1800 227 227 |
Hindustan College | 1800 33 4438 |
HTC | 1800 11 33 77 |
IBM | 1800 443 333 |
ICICI Bank | 1800 333 499 |
ICICI Bank NRI | 1800 22 4848 |
IDBI Bank | 1800 11 6999 |
Indane | 1800 44 51 15 |
Indian Airlines | 1800 180 1407 |
Indian Bank | 1800 425 1400 |
ING Vysya | 1800 44 9900 |
InterContinental Hotels Group | 1800 111 000 |
J M Morgan Stanley | 1800 22 0004 |
Jaipan Teleshoppe | 1800 11 5225 |
Jet Airways | 1800 22 5522 |
Johnson & Johnson | 1800 22 8111 |
Kaya Skin Clinic | 1800 22 5292 |
Kerala Tourism | 1800 444 747 |
KingFisher | 1800 180 0101 (new!) |
Kodak India | 1800 22 8877 |
KONE Elevator | 1800 444 666 |
Kotak Mahindra Bank | 1800 22 6022 |
Kotak Mutual Fund | 1800 222 626 |
Kumarakom Lake Resort | 1800 44 5030 |
Kurl-on | 1800 44 0404 |
L’Or?al, GARNIeR | 1800 223 000 |
Lexmark | 1800 22 4477 |
LG | 1901 180 9999 |
LIC | 1800 33 4433 |
LIC Housing Finance | 1800 44 0005 |
LifeCell | 1800 44 5323 |
Lord Krishna Bank | 1800 11 2300 |
Mahindra Scorpio | 1800 22 6006 |
Manmar Technologies | 1800 33 4420 |
Marriott | 1800 22 0044 |
Marshal’s Point | 1800 33 4488 |
Maruti | 1800 111 515 |
Max New York Life | 1800 33 5577 |
Microsoft | 1800 111 100 |
Microsoft Virus Update | 1901 333 334 |
Motorola MotoAssist | 1800 11 1211 |
NCERT | 1800 11 1265 |
Nokia | 3030 3838 |
Numeric | 1800 44 3266 |
Pedigree | 1800 11 2121 |
Pfizer | 1800 442 442 |
Philips | 1800 22 4422 |
Punjab National Bank | 1800 122 222 |
Raj Travels & Tours | 1800 22 9900 |
Report electricity theft in haryana | 1800 180 1011 |
Roche Accu-Chek | 1800 11 45 46 |
Royal Sundaram | 1800 33 8899 |
Rudraksha | 1800 21 4708 |
Samsung | 1800 113 444 |
Sanyo | 1800 11 0101 |
Sarovar Park Plaza | 1800 111 222 |
SBI Life Insurance | 1800 22 9090 |
SBI Mutual Fund | 1800 22 3040 |
Seagate | 1800 180 1104 |
Sharekhan | 1800 22 7500 |
Sita Tours | 1800 111 911 |
Sleepwell | 1800 11 2266 |
Sony Ericsson | 3901 1111 |
SOTC Tours | 1800 22 3344 |
SpiceJet | 1800 180 3333 |
State Bank of India | 1800 44 1955 |
Symantec | 1800 44 5533 |
Syndicate Bank | 1800 44 6655 |
Taj Holidays | 1800 111 825 |
Tata Motors | 1800 22 5552 |
Tata Mutual Fund | 1800 22 0101 |
Tele Brands | 1800 11 8000 |
Telecom Monitoring Cell | 1800 110 420 |
TVS Electronics | 1800 444 566 |
UPS | 1800 22 7171 |
Varilux Lenses | 1800 44 8383 |
Vellore Institute of Technology | 1800 441 555 |
VLCC | 1800 33 1262 |
VMI Teleshopping | 1800 447 777 |
Voltas | 1800 33 4546 |
WeP Peripherals | 1800 44 6446 |
Windshield Experts | 1800 11 3636 |
Wipro | 1800 333 312 |
World Vision India | 1800 444 550 |
WorldSpace Satellite Radio | 1800 44 5432 |
WWS Teleshopping | 1800 220 777 |
xerox | 1800 180 1225 |
Zenith | 1800 222 004 |
Tuesday, March 15, 2016
TOLL FREE NUMBERS
ಹಾಸ್ಯ ಸಂಗ್ರಹ
ಮಂತ್ರವಾದಿ: ಭಕ್ತಾ.. ನಾನು ಕೊಟ್ಟ ತಾಯಿತ ಹೇಗಿದೆ?
ಗುಂಡ: ಸ್ವಾಮಿ.. ಹೆಂಡತಿ ನನ್ನನ್ನು ಪ್ರೀತಿಸುವ ಬದಲು, ಪಕ್ಕದಮನೆಯವಳು ಪ್ರೀತಿಸುತ್ತಾ ಇದ್ದಾಳೆ..
ಮಂತ್ರವಾದಿ: ಓಹೋ.. ಎಲ್ಲೋ ಸೈಡ್ ಎಫೆಕ್ಟ್ ಆಗಿರಬೇಕು..
*********************************
ಒಬ್ಬ ಸೋಮಾರಿ ಯುವಕ ಜ್ಯೋತಿಷ್ಯ ಕೇಳಲು ಸ್ವಾಮೀಜಿ ಬಳಿ ಹೋಗುತ್ತಾನೆ..
ಯುವಕ: ನಿಮ್ಮ ದಯೆಯಿಂದ ನನಗೆ ಒಂದು ಕೆಲಸ ಕೊಡಿಸಿ.
ಸ್ವಾಮೀಜಿ: ನಿನಗೆ ಯಾವ ರೀತಿಯ ಕೆಲಸ ಬೇಕು?
ಯುವಕ: ಅಲ್ಲಿ ನಾನು ಕೆಲಸ ಮಾಡಬಾರದು.. ಆದರೆ ಜನ ಅಲ್ಲಿ ತಮ್ಮ ತಮ್ಮ ಕೆಲಸ ಮುಗಿಸಿ ನನಗೆ ಹಣ ಕೊಡಬೇಕು..
ಸ್ವಾಮೀಜಿ: ಹೋಗು.. ಒಂದು ಶೌಚಾಲಯ ಓಪನ್ ಮಾಡ್ಕೋ..
*********************************
ತಂದೆ: ಮಗನೇ.. ನಿನಗೊಂದು ಒಳ್ಳೆ ಹುಡುಗಿಯನ್ನು ನೋಡಿದ್ದೇನೆ..
ಮಗ: ಹೌದಾ..
ತಂದೆ: ಅವಳು ರೂಪವತಿ. ಗುಣವತಿ.. ಭಾಗ್ಯವತಿ ಕೂಡಾ.
ಮಗ: ನಿನಗ್ಯಾಕೆ ಕಷ್ಟ ಅಪ್ಪಾ. ನಾನೊಂದು ಹುಡುಗಿಯನ್ನು ಈಗಾಗಲೇ ನೋಡಿದ್ದೇನೆ. ಅವಳು ರೂಪವತಿ, ಗುಣವತಿ ಜೊತೆ ಗರ್ಭವತಿ ಕೂಡಾ.
*********************************
ಹಳೆಯ ಕಾರೊಂದನ್ನು ಹರಾಜು ಹಾಕಲಾಗುತ್ತಿತ್ತು. ಹರಾಜು ಪ್ರಕ್ರಿಯೆಯಲ್ಲಿ ತುಂಬಾ ಜನ ಭಾಗವಹಿಸಿದ್ದರು. ಒಂದು ಲಕ್ಷ.. ಎರಡು ಲಕ್ಷ.. ಎಂದು ಕಾರಿನ ಬಿಡ್ ಆಶ್ಚರ್ಯ ರೀತಿಯಲ್ಲಿ ಏರಿಕೆಯಾಗುತ್ತಲೇ ಇತ್ತು..
ಇದರಿಂದ ಗಾಬರಿಗೊಂಡ ತಿಮ್ಮ, ಲಕ್ಷ ಲಕ್ಷ ರೂಪಾಯಿಗೆ ಈ ಹಳೇ ಕಾರು ಬಿಡ್ ಆಗ್ತಾ ಇದೆಯಲ್ಲಾ, ಏನಿದರ ಮರ್ಮ ಎಂದು ಬಿಡ್ ನಲ್ಲಿ ಭಾಗವಹಿಸಿದವನ ಬಳಿ ಕೇಳಿದ..
ಸರ್, ಈ ಕಾರು ಐದು ಬಾರಿ ಅಪಘಾತಕ್ಕೀಡಾಗಿದೆ. ಐದು ಬಾರಿ ಆಕ್ಸಿಡೆಂಟ್ ಆದಾಗಲೂ ಕಾರಿನಲ್ಲಿ ಇದ್ದವರ ಪೈಕಿ ಕೇವಲ ಹೆಂಡತಿ ಮಾತ್ರ ಸಾವನ್ನಪ್ಪಿದ್ದಾಳೆ ಎಂದಾಗ ತಿಮ್ಮ ದೂಸ್ರಾ ಮಾತನಾಡದೇ ಎಂಟು ಲಕ್ಷಕ್ಕೆ ಕಾರನ್ನು ಬಿಡ್ ನಲ್ಲಿ ಖರೀದಿಸಿದ... ತಿಮ್ಮನ ಮುಖದಲ್ಲಿ ಅದೇನೋ ಸಾಧನೆ ಮಾಡಿದ ಮಂದಹಾಸ...
*********************************
ನಾನು ಕೇಳಿದ್ದೆಲ್ಲಾ ಕೊಟ್ಟೆ, ಆದರೆ ನನ್ನ ಈ ಕೋರಿಕೆಯನ್ನು ಯಾಕೆ ಈಡೇರಿಸಿಲ್ಲ ಎಂದು ತಿಮ್ಮ ದೇವರ ಫೋಟೋ ಮುಂದೆ ಗೋಗರಿಯುತ್ತಿದ್ದ...
ತಿಮ್ಮನ ಹೆಂಡತಿ ಹೊರ ಹೋದಾಗಲೆಲ್ಲಾ ತಿಮ್ಮ ಯಾಕೆ ದೇವ್ರ ಮುಂದೆ ಅಳುತ್ತಾನೆಂದು ಮನೆ ಓನರ್ ಕದ್ದುಮುಚ್ಚಿ ತಿಮ್ಮನ ಮನೆಗೆ ಬಂದಾಗ ತಿಮ್ಮ ಈ ರೀತಿ ಪ್ರಾರ್ಥಿಸುತ್ತಿದ್ದ..
ನೀನು ಬಾಲ್ಯ ಕೊಟ್ಟೆ.. ವಾಪಸ್ ತೆಗೊಂಡೆ..
ಯೌವ್ವನ ಕೊಟ್ಟೆ.. ವಾಪಸ್ ತೆಗೊಂಡೆ..
ಒಳ್ಳೆ ಕೆಲ್ಸಾ ಕೊಟ್ಟೆ, ಒಳ್ಳೆ ಆರೋಗ್ಯ ಕೊಟ್ಟೆ, ಐಶ್ವರ್ಯ ಕೊಟ್ಟೆ.. ಅದನ್ನೂ ವಾಪಸ್ ತೆಗೊಂಡೆ
ಆದ್ರೆ ಹೆಂಡತಿ ಕೊಟ್ಟೆ.. ಅದನ್ಯಾಕೆ ಎಂದಾಗ ಅಲ್ಲೇ ಬಚ್ಚಿ ಕೇಳಿಸಿ ಕೊಳ್ಳುತ್ತಿದ್ದ ಮನೆ ಓನರಿಗೆ ತಡೆದುಕೊಳ್ಳಲಾಗದೇ, ತಿಮ್ಮನನ್ನು ಬಿಗಿದಪ್ಪಿ.. ಅಳಬೇಡಪ್ಪಾ... ನಾನೂ ನಿನ್ನ ಜೊತೆಗಿದ್ದೇನೆ ಎಂದಾಗ ತಿಮ್ಮನ ಅಳು ಇಮ್ಮಡಿಯಾಯಿತು..
*********************************
ಬಲಗಾಲಿಟ್ಟು ಬಂದ ಮನೆ ಸೊಸೆಗೆ ಅತ್ತೆ ಮನೆಯ ಬಗ್ಗೆ ವಿವರಿಸುತ್ತಾ...
ನಾನು ಈ ಮನೆಯ ಗೃಹ ಸಚಿವೆ, ನಿನ್ನ ಮಾವ ಹಣಕಾಸು ಸಚಿವ, ನನ್ನ ಮಗಳು ಸಾಮಾಜಿಕ ಅಭಿವೃದ್ದಿ ಸಚಿವೆ..
ಮಗ ಅಂದರೆ ನಿನ್ನ ಗಂಡ ನಾಗರಿಕ ಪೂರೈಕೆ ಅಥವಾ ಮನೆ ಅಗತ್ಯ ಪೂರೈಕೆ ಸಚಿವ..
ಈಗ ಹೇಳು.. ನೀನು ಯಾವ ಖಾತೆಯನ್ನು ಹೊರುತ್ತೀಯಾ.. ಎಂದಾಗ..
ಸೊಸೆ ಮಂದಹಾಸ ಬೀರುತ್ತಾ.. ನಾನು ವಿರೋಧ ಪಕ್ಷದ ನಾಯಕಿಯಾಗುತ್ತೇನೆಂದಾಗ ಅತ್ತೆ ಸುಸ್ತೋ.. ಸುಸ್ತು.
ಮನೆಯಲ್ಲಿ ಮಕ್ಕಳ ಸೈನ್ಯ ವಿಪರೀತವಾದ ಮೇಲೆ 'ಕುಟುಂಬ ಯೋಜನೆ'ಯ ಮೊರೆ ಹೋಗಲು ಗುಂಡ ನಿರ್ಧರಿಸಿದ. ಅದರಂತೆ ನಗರದ ಕ್ಲಿನಿಕ್ ಒಂದಕ್ಕೆ ಹೋಗಿ ವೈದ್ಯರನ್ನು ಭೇಟಿಯಾದ.
ವೈದ್ಯರು ಔಷದಿ ಕೊಟ್ಟರು ವರ್ಕೌಟ್ ಆಗಲಿಲ್ಲ. ವೈದ್ಯರನ್ನು ಬದಲಾಯಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಗುಂಡ ಅಮೆರಿಕಾಕ್ಕೆ ಹೋಗಿ ತಜ್ಞ ವೈದ್ಯರ ಸಲಹೆ ಪಡೆಯಲು ಪತ್ನಿ ಸಮೇತ ಅಲ್ಲಿಗೆ ಹಾರಿದ.
ಅಲ್ಲಿನ ಹೆಸರಾಂತ ಡಾಕ್ಟರನ್ನು ಭೇಟಿಯಾಗಿ ಗುಂಡ ತನ್ನ ಸಮಸ್ಯೆಯನ್ನು ವಿವರಿಸಿದ. ಗುಂಡನ ಸಮಸ್ಯೆಯನ್ನು ಆಲಿಸಿದ ನಂತರ 'ನೀನು ಇಷ್ಟೆಲ್ಲಾ ಗರ್ಭನಿರೋಧಕ ಔಷದಗಳನ್ನು ಬಳಸಿಯೂ ವಿಫಲವಾಗಿದೆ ಎಂದ ಮೇಲೆ ನಿನ್ನ ಹೆಂಡತಿಯಿಂದ ನೀನು ದೂರವಿರುವುದೇ ಲೇಸು' ಎಂದು ವೈದ್ಯರು ಸಲಹೆ ನೀಡಿದರು.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಗುಂಡ, ಡಾಕ್ಟ್ರೇ, ನಾನದನ್ನು ಪ್ರಯತ್ನಿಸಿ ನೋಡಿಯಾಗಿದೆ ಎಂದಾಗ ವೈದ್ಯ ಮಹಾಶಯ ಸುಸ್ತು.
ಡಾಕ್ಟರ್ : ಇಂಜಕ್ಷನ್ ಕೊಡುತ್ತೇನೆ.
ತಿಮ್ಮ: ಹಲ್ಲಿಲ್ಲದ ನಾಯಿ ಕಚ್ಚಿದರೆ?
ಡಾಕ್ಟರ್ : ಸೂಜಿ ಇಲ್ಲದ ಸಿರಿಂಜ್ ನಿಂದ ಇಂಜಕ್ಷನ್ ಕೊಡುತ್ತೇನೆ, ಮುಠಾಳ.. ಗೆಟೌಟ್
*********************************
ಗುಂಡ: ಅಮ್ಮಾ, ಪರೀಕ್ಷೆಗೆ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಪೆನ್, ಪೆನ್ಸಿಲ್, ಕಂಪಾಸ್ ಬಾಕ್ಸ್ ಎಲ್ಲಾ ಇಟ್ಟುಕೊಂಡಿದ್ದೇನೆ.
ಅಮ್ಮ : ಗುಡ್ ಮಗನೇ.
ಗುಂಡ: ಒಂದು ತಯಾರಿ ಮಾತ್ರ ಬಾಕಿ ಇದೆಯಮ್ಮಾ?
ಅಮ್ಮ: ಏನದು?
ಗುಂಡ : ಪರೀಕ್ಷೆಗೆ ಓದುವುದು...
*********************************
ಮರಿಗುಂಡ ಎಷ್ಟು ಹೇಳಿದರೂ ಕ್ರಿಕೆಟ್ ಆಡುವುದನ್ನು ಬಿಡುತ್ತಿರಲಿಲ್ಲ. ಬರೀ ಕ್ರಿಕೆಟ್ ನಲ್ಲಿ ಕಾಲ ಕಳೆಯುತ್ತಿದ್ದ. ಮರಿಗುಂಡನಿಗೆ ಏನಾದರೂ ಆಸೆ ತೋರಿಸಿ ಓದುವಂತೆ ಮಾಡಲು ಗುಂಡ ನಿರ್ಧರಿಸಿದ.
ಗುಂಡ: ಮಗನೇ, ಚೆನ್ನಾಗಿ ಓದಿ ಪಾಸಾಗು. ನಿನಗೆ ಒಳ್ಳೆ ಗಿಫ್ಟ್ ಕೊಡುತ್ತೇನೆ.
ಮರಿಗುಂಡ: ಏನ್ ಗಿಫ್ಟ್ ಕೊಡುತ್ತೀಯಾ ಅಪ್ಪ?
ಗುಂಡ : ಸೈಕಲ್ ಕೊಡಿಸ್ತೀನಿ
ಮರಿಗುಂಡ : ಫೇಲಾದ್ರೆ?
ಗುಂಡ: ಹತ್ತು ಸೈಕಲ್ ಕೊಡಿಸ್ತೀನಿ
ಮರಿಗುಂಡ: ಫೇಲಾದ್ರೆ ಹತ್ತು ಸೈಕಲ್ ಕೊಡಿಸ್ತೀಯಾ..ಯಾಕೆ?
ಗುಂಡ : ಸೈಕಲ್ ಶಾಪ್ ಇಡೋಕೆ.. ರಾಸ್ಕಲ್..
ಸರ್ದಾರ್ಜಿ 2 : ಓಯ್, ನಿಲ್ಲೋ ನಿಲ್ಲು. ಬಾಂಬ್ ಫಿಕ್ಸ್ ಮಾಡುವ ಹಂತದಲ್ಲಿ ಅದೇ ಸ್ಫೋಟವಾಗಿಬಿಟ್ಟರೆ ಏನೋ ಮಾಡ್ತೀಯಾ?
ಸರ್ದಾರ್ಜಿ 1 : ಸ್ಫೋಟ ಆದ್ರೆ ಆಗ್ಲಿ ಬಿಡೋ ಚಿಂತೆ ಮಾಡ್ಬೇಡ. ನನ್ನ ಬಳಿ ಇನ್ನೊಂದು ಬಾಂಬ್ ಇದೆ!
*********************************
ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಟೀಚರ್ ಮೊದಲ ಬಾರಿ ಪಾಠ ಮಾಡಲು ಬಂದಿರುತ್ತಾರೆ. ವಿದ್ಯಾರ್ಥಿಗಳು ಹೊಸಬರಾದ್ದರಿಂದ ಅವರ ಪರಿಚಯ ಮಾಡಿಕೊಳ್ಳಲು ಬಯಸುತ್ತಾರೆ. ಟೀಚರ್ ಹೊಸಬರಾದ್ದರಿಂದ ವಿದ್ಯಾರ್ಥಿಗಳು ಕೂಡ ಟೀಚರ್ ಜೊತೆ ಸ್ವಲ್ಪ ಕೀಟಲೆ ಮಾಡಬೇಕೆಂದು ಬಯಸುತ್ತಾರೆ.
ಟೀಚರ್ : (ಒಟ್ಟು ಮರಿ ಸರ್ದಾರ್ಜಿಯನ್ನು ಉದ್ದೇಶಿಸಿ) ನಿನ್ನ ಹೆಸರೇನು? ನೀನು ಹುಟ್ಟಿದ್ದು ಯಾವ ಊರಿನಲ್ಲಿ?
ಮರಿ ಸರ್ದಾರ್ಜಿ : ನನ್ನ ಹೆಸರು ಸುಖಮಿಂದರ್. ನಾನು ಹುಟ್ಟಿದ್ದು ತಿರುವನಂತಪುರದಲ್ಲಿ.
ಟೀಚರ್ (ಕೀಟಲೆಯನ್ನು ಗ್ರಹಿಸಿ) : ಹೌದಾ? ತಿರುವನಂತಪುರದಲ್ಲಿ ಹುಟ್ಟಿದ್ದಾ? ಎಲ್ಲಿ ತಿರುವನಂತಪುರದ ಸ್ಪೆಲ್ಲಿಂಗ್ ಇಲ್ಲಿ ಬೋರ್ಡಿನ ಮೇಲೆ ಬರಿ ಬಾ ನೋಡೋಣ?
ಮರಿ ಸರ್ದಾರ್ಜಿ : ಈಗ ನೆನಪಾಯಿತು. ನನಗನಿಸತ್ತೆ ನಾನು ಹುಟ್ಟಿದ್ದು ಗೋವಾದಲ್ಲಿ. ಅದರ ಸ್ಪೆಲ್ಲಿಂಗ್ ಬೋರ್ಡಿನ ಮೇಲೆ ಬರೆಯಲಾ?
*********************************
ಸರ್ದಾರ್ಜಿಗೆ ಏನೋ ಕಾಯಿಲೆ. ಪರೀಕ್ಷೆ ಮಾಡಿಸೋಣವೆಂದು ವೈದ್ಯರ (ಆತನೂ ಸರ್ದಾರ್ಜಿ) ಬಳಿ ಬಂದಿರುತ್ತಾರೆ. ವೈದ್ಯರು ಸರ್ದಾರ್ಜಿಯನ್ನು ಅಡ್ಮಿಟ್ ಮಾಡಿಕೊಂಡು, ಸ್ಥೂಲವಾಗಿ ಪರೀಕ್ಷೆ ನಡೆಸಿದ ನಂತರ, ಪೆಚ್ಚುಮೋರೆ ಮಾಡಿಕೊಂಡು ಬಂದು...
ವೈದ್ಯ : ಐ ಆಮ್ ರಿಯಲಿ ಸಾರಿ. ನೀನಿನ್ನು ಬದುಕಿರುವುದು ಕೇವಲ 2 ಗಂಟೆಗಳು ಮಾತ್ರ. ನನ್ನ ಕೈಲಿ ಏನೂ ಇಲ್ಲ, ಎಲ್ಲಾ ದೈವೇಚ್ಛೆ. ನೀವು ಸಾಯುವ ಮೊದಲು ಯಾರನ್ನಾದರೂ ನೋಡಬೇಕೆಂದು ಬಯಸಿದ್ದೀರಾ?
ಸರ್ದಾರ್ಜಿ : ಹೌದು, ಇನ್ನೊಬ್ಬ ವೈದ್ಯನನ್ನು!
"ತಾತಾ ನೀವು ಮದುವೆ ಆಗ್ತಿರೋ ಹುಡುಗೀಗೆ ಕೇವಲ 21 ವರ್ಷ. ಈ ವಯಸ್ಸಿನಲ್ಲಿ ನೀವು ಮದುವೆ ಆಗೋದು ತರವಲ್ಲ. ನಿಮ್ಮ ದಾಂಪತ್ಯ ದುರಂತದಲ್ಲಿ ಕೊನೆಯಾಗಬಹುದು ಎಚ್ಚರ!"
ತಾತ ಉತ್ತರ ಕೊಟ್ಟ, "ನಾನು ಅದಕ್ಕೆಲ್ಲಾ ಹೆದರಲ್ಲ. ಅವಳು ಸತ್ತರೆ ಮತ್ತೊಂದು ಮದುವೆ ಆಗೇ ಆಗ್ತೀನಿ."
ಗಣೇಶ್ ಆನಂದ್
*********************************
ವಿದ್ಯಾರ್ಥಿ : (ದಪ್ಪ ದನಿ ಮಾಡಿಕೊಂಡು) ಇವತ್ತು ನನ್ನ ಮಗನಿಗೆ ತುಂಬಾ ಜ್ವರ, ಶೀತದಿಂದ ಬಳಲುತ್ತಿದ್ದಾನೆ. ಅವನಿಗೆ ಇವತ್ತು ಶಾಲೆಗೆ ಬರಲಾಗುವುದಿಲ್ಲ.
ಟೀಚರ್ : ಯಾರದು ಮಾತಾಡ್ತಿರೋದು?
ವಿದ್ಯಾರ್ಥಿ : ನನ್ನಪ್ಪ ಮಾತಾಡ್ತಿದ್ದೀನಿ!
*********************************
ಮೇಷ್ಟ್ರು : ಗುಂಡ, ಮೂಢನಂಬಿಕೆ ಬಗ್ಗೆ ಪ್ರಬಂಧ ಬರ್ಕೊಂಡ್ಬಾ ಅಂತ ಹೇಳಿದ್ದೆನಲ್ಲ? ಎಲ್ಲಿದೆ? ನೀನೊಬ್ನೇ ತೋರ್ಸಿಲ್ಲ.
ಗುಂಡ : ಪ್ರಬಂಧ ಬರೆದಿದ್ದೆ ಮೆಷ್ಟ್ರೆ. ಆದ್ರೆ, ಅಷ್ಟರಲ್ಲಿ ನನ್ನ ನಾಯಿ ಬಂದು ಪರಪರ ಹರಿದು ತಿಂದುಬಿಟ್ಟಿತು.
ಮೇಷ್ಟ್ರು : ಓಹೋ, ನಾಯಿ ತಿಂತಾ? ನಾಯಿ ಪೇಪರ್ ತಿಂದಿದ್ದನ್ನು ನನ್ನ ಜನ್ಮದಲ್ಲೇ ಕೇಳಿಲ್ಲ, ನೋಡಿಲ್ಲ. ನೀ ಹೇಳಿದ್ದನ್ನ ನಂಬಬೇಕಾ?
ಗುಂಡ : ಏನ್ ಕೇಳ್ತೀರಾ ಮೇಷ್ಟ್ರೆ. ಮೊದಲಿಗೆ ಟಾಮಿ ತಿನ್ನಲೇ ಇಲ್ಲ. ಅದಕ್ಕೊಂದಿಷ್ಟು ಜೇನುತುಪ್ಪ ಸವರಿಕೊಟ್ಟ ಮೇಲೆ ಎಲ್ಲಾ ತಿಂದುಬಿಟ್ಟಿತು.
ಗಂಡ : ಇನ್ನೇನ್ ಮಾಡ್ಲಿ. ನೊಣ ಹೊಡೀತಾ ಇದ್ದೀನಿ.
ಹೆಂಡತಿ : ನೊಣ ಏನಾದ್ರೂ ಸಿಕ್ಕಿದ್ವಾ?
ಗಂಡ : ಹೂಂ ಮತ್ತೆ ಬಿಡ್ತೀನಾ. ಒಟ್ಟು 3 ಗಂಡು 2 ಹೆಣ್ಣು ನೊಣ ಹೊಡೆದು ಸಾಯಿಸಿದ್ದೀನಿ.
ಹೆಂಡತಿ : ನೊಣಗಳ ಲಿಂಗ ಹೇಗೆ ಗೊತ್ತಾಯ್ತು ನಿಮಗೆ?
ಗಂಡ : ಪೆದ್ದಿ, ಅಷ್ಟೂ ಗೊತ್ತಾಗಲ್ವಾ? ಅದು ತುಂಬಾ ಸುಲಭ.
ಹೆಂಡತಿ : ರೀ ಪೆದ್ದಿ ಗಿದ್ದಿ ಅನ್ಬೇಡ್ರಿ ತವರು ಮನೆಗೆ ಹೊರಟುಹೋಗಿ ಬಿಡ್ತೀನಿ. 3 ಗಂಡು 2 ಹೆಣ್ಣು ಹೇಗಂತ ಹೇಳಿ ಸಾಕು.
ಗಂಡ : 3 ನೊಣ ಬಿಯರ್ ಬಾಟಲ್ ಮೇಲೆ ಕುಳಿತಿದ್ದವು. 2 ನೊಣ ಫೋನ್ ಮೇಲೆ ಕುಳಿತಿದ್ದವು!
*********************************
ಹೆಂಡ್ತಿ ಬಟ್ಟೆ ಎಷ್ಟು ಚೆನ್ನಾಗಿ ಒಗೀತಾಳೆ, ಗೊತ್ತಾ
ಸುರೇಸ : ನನ್ನ ಹೆಂಡ್ತಿ ಬಟ್ಟೆ ಎಷ್ಟು ಚೆನ್ನಾಗಿ ಒಗೀತಾಳೆ ಗೊತ್ತಾ? ಒಂದು ಕಲೆ ಇರೋದಿಲ್ಲ. ಆದರೆ, ಒಂದನ್ನು ಹೊರತುಪಡಿಸಿ.
ದಿನೇಸ : ಯಾವುದನ್ನು ಹೊರತುಪಡಿಸಿ?
ಸುರೇಸ : ನನ್ನ ಅಂಗಿಯ ಮೇಲೆ ಮೂಡಿರುವ ಲಿಪ್ ಸ್ಟಿಕ್ ಕಲೆಯೊಂದನ್ನು ಹೊರತುಪಡಿಸಿ!
Monday, March 14, 2016
ಜನಪ್ರಿಯ ಒಗಟುಗಳು
ಜನಪ್ರಿಯ ಒಗಟುಗಳು
೧. ಗೂಡಿನಲ್ಲಿನ ಪಕ್ಷಿ ನಾಡೆಲ್ಲ ನೋಡುತ್ತದೆ- ಕಣ್ಣು
೨. ಕಾಸಿನ ಕುದುರೆಗೆ ಬಾಲದ ಲಗಾಮು- ಸೂಜಿ ದಾರ
೩. ಎಲೆ ಇಲ್ಲ, ಸುಣ್ಣ ಇಲ್ಲ, ಬಣ್ಣವಿಲ್ಲ ತುಟಿ ಕೆಂಪಗಾಗಿದೆ, ಮಳೆಯಿಲ್ಲ , ಬೆಲೆಯಿಲ್ಲ , ಮೈ ಹಸಿರಾಗಿದೆ- ಗಿಳಿ
೪. ಮನೆ, ಮನೆಗೆರಡು ಬಾಗಿಲು, ಬಾಗಿಲ ಮುಂದೆ , ಮುಚ್ಚಿದರೆ ಹಾನಿ ಇದೇನು?- ಮೂಗು, ಬಾಯಿ
೫. ಸುತ್ತ ಮುತ್ತ ಸುಣ್ಣದ ಗೋಡೆ, ಎತ್ತ ನೋಡಿದರೂ ಬಾಗಿಲಿಲ್ಲ ಇದು ಏನು?- ಮೊಟ್ಟೆ
೬. ಅಂಗಳದಲ್ಲಿ ಹುಟ್ಟುವುದು, ಅಂಗಳದಲ್ಲಿ ಬೆಳೆಯುವುದು, ತನ್ನ ಮಕ್ಕಳ ಹಂಗಿಸಿ ಮಾತಾಡುವುದು ಇದು ಏನು? ಕೋಳಿ
೭. ಇದ್ದಲು ನುಂಗುತ್ತ , ಗದ್ದಲ ಮಾಡುತ್ತಾ, ಉದ್ದಕ್ಕೂ ಓಡುತ್ತಾ ಮುಂದಕ್ಕೆ ಸಾಗುವ ನಾನ್ಯಾರು?- ರೈಲು
೮. ಊಟಕ್ಕೆ ಕುಳಿತವರು ಹನ್ನೆರಡು ಜನರು, ಬಡಿಸುವವರು ಇಬ್ಬರು, ಒಬ್ಬನು ಒಬ್ಬರಿಗೆ ಬಡಿಸುವಸ್ಟರಲ್ಲಿ ಇನ್ನೊಬ್ಬನು ಹನ್ನೆರಡು ಜನಕ್ಕೂ ಬಡಿಸಿರುತ್ತಾನೆ- ಗಡಿಯಾರ
೯. ಹಸಿರು ಹಾವರಾಣಿ, ತುಂಬಿದ ತತ್ರಾಣಿ, ಹೇಳದಿದ್ದರೆ ನಿಮ್ಮ ದೇವರಾಣಿ- ಕಲ್ಲಂಗಡಿ ಹಣ್ಣು
೧೦. ಮೊಟ್ಟೆ ಒಡೆಯೋ ಹಾಗಿಲ್ಲ ಕೊಡ ಮುಳುಗಿಸೋ ಹಾಗಿಲ್ಲ ಬರಿ ಕೊಡೆ ತಗೊಂಡು ಬಾರೋ ಹಾಗಿಲ್ಲ-ತೆಂಗು
೧೨. ಕಡಿದರೆ ಕಚ್ಚೋಕೆ ಆಗೋಲ್ಲ , ಹಿಡದ್ರೆ ಮುಟ್ಟೋಕೆ ಸಿಗೋಲ್ಲ-ನೀರು
೧೩.ಒಂದು ರುಮಾಲು ನಮ್ಮಪ್ಪನೂ ಸುತ್ತಲಾರ.-ದಾರಿ
೧೪. ಅಬ್ಬಬ್ಬ ಹಬ್ಬ ಬಂತು, ಸಿಹಿಕಹಿ ಎರಡೂ ತಂತು.-ಯುಗಾದಿ
೧೫. ಹುಟ್ಟುತ್ತಲೇ ಹುಡುಗ ತಲೆಯಲ್ಲಿ ಟೋಪಿ ಹಾಕಿರುತ್ತೆ .-ಬದನೆಕಾಯಿ.
೧೬. ಸಾಗರ ಪುತ್ರ ,ಸಾರಿನ ಮಿತ್ರ.-ಉಪ್ಪು
೧೭. ಸಾವಿರಾರು ಹಕ್ಕಿಗಳು, ಒಂದೇ ಬಾರಿಗೆ ನೀರಿಗಿಳಿತವೆ.-ಅಕ್ಕಿ
೧೮. ಗುಡುಗು, ಗುಡುಗಿದರೆ ಸಾವಿರ ನಯನಗಳು ಅರಳುವುದು.-ನವಿಲು.
೧೯. ಕಣ್ಣಿಲ್ಲ, ಕಾಲಿಲ್ಲ ,ಆದರು ಚಲಿಸುತಿದೆ ಯಾವುದು ಎಲ್ಲಿದೆ ಬಲ್ಲಿದನ ಹೇಳಿರಲ.-ನದಿ
೨೦. ಹಲ್ಲಿಲ್ಲದ ಹಕ್ಕಿಗೆ ಗೂಡು ತುಂಬ ಮರಿಗಳು.-ಕೋಳಿ
೨೧. ಮೋಟು ಗೋಡೆ ಮೇಲೆ, ದೀಪ ಉರೀತಿದೆ.-ಮೂಗುಬೊಟ್ಟು
೨೨. ಹೊಂಚು ಹಾಕಿದ ದೆವ್ವ, ಬೇಡ ಬೇಡ ಎಂದರೂ ಜೂತೆಯೇ ಬರುತ್ತೆ.-ನೆರಳು
೨೩. ಮರನು ಮರನೇರಿ ಮತ್ತೆ ಮರನೇರಿ ಬಸವನಾ ಕತ್ತೇರಿ ತಿರುಗುತ್ತಿದೆ-ಗಾಣ
೨೪. ಹೊಕ್ಕಿದ್ದು ಒಂದಾಗಿ ಹೊರಟಿದ್ದು ಅದು ನೂರಾಗಿ-ಶ್ಯಾವಿಗೆ
೨೫. ಮಣ್ಣು ಆಗಿದೆ ಕಲ್ಲು ಸಿಕ್ಕಿತು, ಕಲ್ಲು ಆಗಿದೆ ಬೆಳ್ಳಿ ಸಿಕ್ಕಿತು, ಬೆಳ್ಳಿ ಒಡೆದ ನೀರು ಸಿಕ್ಕಿತು-ತೆಂಗಿನಕಾಯಿ
೨೬. ಕತ್ತಲೆ ಮನೆಯಲಿ ಕಾಳವ್ವ ಕುಂತವ್ಳೆ ಕುಯ್ಯೋ, ಮರ್ರೋ ಅಂತವಳೇ-ತಂಬೂರಿ
೨೭. ಹಾರಿದರೆ ಹನುಮಂತ, ಕೂತರೆ ಮುನಿ, ಕೂಗಿದರೆ ಕಾಡಿನ ಒಡೆಯ-ಕಪ್ಪೆ
೨೮. ಕೈಲಿದ್ದಾಗ ಗುದಿಸಾಡುತ್ತೇನೆ, ಕೈ ಬಿಟ್ಟಾಗ ಗೊರಕೆ ಒಡೆಯುತ್ತೇನೆ-ಕಸಪೊರಕೆ
೨೯. ಗಿಡ ಕೊಡಲಾರದು, ಮರ ಬೆಳೆಸಲಾರದು ಅದಿಲ್ಲದೆ ಊಟ ಸೇರಲಾರದು-ಉಪ್ಪು
೩೦. ನೀರಿಲ್ಲದ ಸಮುದ್ರ, ಜನರಿಲ್ಲದ ಪಟ್ಟಣ, ಸಂಚಾರವಿಲ್ಲದ ಮಾರ್ಗಗಳು ಎಲ್ಲಿ?-ನಕ್ಷೆ
೩೧. ಒಬ್ಬನನ್ನು ಹಿಡಿದರೆ ಎಲ್ಲಾರ ಮರ್ಜಿಯು ಗೊತ್ತಾಗುತ್ತದೆ.- ಅನ್ನದ ಅಗುಳು.
೩೨. ಮೇಲೆ ನೋಡಿದರೆ ನಾನಾ ಬಣ್ಣ, ಉಜ್ಜಿದರೆ ಒಂದೇ ಬಣ್ಣ.-ಸಾಬೂನು.
೩೩. ಒಂದು ಕೊಂಬಿನ ಗುಳಿ ಅದರ ತಲೆಯೆಲ್ಲಾ ಮುಳ್ಳು.-ಬದನೆಕಾಯಿ.
೩೪. ನಾನು ತುಳಿದೆ ಅದನ್ನ, ಅದು ತುಳಿಯೆತು ನನ್ನನ್ನ.-ನೀರು
೩೫. ಕೊಳದ ಒಳಗೆ ಒಂದು ಮರ ಹುಟ್ಟಿ ,ಬೇರು ಇಲ್ಲ ,ನೀರು ಇಲ್ಲ.-ಎಣ್ಣೆ ದೀಪ.
೩೬. ಬಡ ಬಡ ಬಂದ ಅಂಗಿ ಕಳಚಿದ ,ಬಾವಿಯೊಳಗೆ ಬಿದ್ದ.-ಬಾಳೆ ಹಣ್ಣು.
೩೭. ನೋಡಿದರೆ ನೋಟಗಳು ,ನಕ್ಕರೆ ನಗುಗಳು ,ಒಡೆದರೆ ತುಂಡುಗಳು.-ಕನ್ನಡಿ
೩೮. ಅಕ್ಕ ಪಕ್ಕ ಚದುರಂಗ ,ಅದರ ಹೂವು ಪದುರಂಗ ಅದರ ಹೆಸರು ಅಯ್ಯಯ್ಯಪ್ಪ .ಇದು ಏನು?-ದತ್ತುರಿಯ ಮುಳ್ಳು.
೩೯. ವನದಲ್ಲಿ ಹುಟ್ಟಿ ,ವನದಲ್ಲಿ ಬೆಳೆದು ,ವನದಿಂದ ಹೊರಟು ವನಜಲೊನೆ ಶಿರಕ್ಕೆರುವರು.-ಕಮಲ.
೪೦. ಕಲ್ಲು ಕೋಳಿ ಕುಗುತ್ತದೆ, ಮುಲ್ಲ ಚೂರಿ ಹಾಕುತ್ತಾನೆ.-ಗಿರಣಿ
೪೧. ಸಾವಿರ ತರುತ್ತೆ ಲಕ್ಷ ತರುತ್ತೆ ನೀರಿನಲ್ಲಿ ಹಾಕಿದರೆ ಸಾಯುತ್ತೆ.-ದುಡ್ಡು.
೪೨. ತಕ್ಕಡೀಲಿ ಇಟ್ಟು ಮಾರೋ ಹಾಗಿಲ್ಲ, ಅದಿಲ್ಲದೆ ಹಬ್ಬ ಅಗೋ ಹಾಗಿಲ್ಲ.-ಸಗಣಿ.
೪೩. ಚರಚರ ಕೊಯ್ತದೆ ಕತ್ತಿ ಅಲ್ಲ, ಮಿಣಿಮಿಣಿ ಮಿಂಚುತ್ತದೆ ಮಿಂಚಲ್ಲ, ಪೆಟ್ಟಿಗೆಗೆ ತುಂಬ್ತದೆ ದಾಗಿನ ಅಲ್ಲ.- ಗರಗಸ.
೪೪. ಕಡ್ಲೆ ಕಾಳಷ್ಟು ಹಿಂಡಿ ೩೨ ಮನೆ ಸಾರಿಸಿ ಬಚ್ಚಲ ಪಾಲು ಆಗುತ್ತೆ.-ಹಲ್ಲುಪುಡಿ.
೪೫. ಕರಿ ಗುಡ್ಡ-ಬಿಳಿ ನೀರು ಅದ್ರಾಗೆ ಕುಂತವಳೇ ಚಂಪರಾಣಿ.-ಗಡಿಗೆಮಜ್ಜಿಗೆ.
೪೬. ಕೆಂಪು ಕುದುರೆ ಮೇಲೆ ಒಬ್ಬ ಏರುತ್ತಾನೆ, ಒಬ್ಬ ಇಳಿಯುತ್ತಾನೆ .-ರೊಟ್ಟಿ, ದೋಸೆ
೪೭. ಕೆಂದ ಕುದುರೆ ,ಬಿಳಿ ತಡಿ, ಕರೆ ಲಗಾಮು, ಅಣ್ಣ ಅತ್ತಾನೆ, ತಮ್ಮ ಇಳಿತ್ತಾನೆ-ಬೆಂಕಿ, ಸುಣ್ಣ ಹಚ್ಚಿದ ಹಂಚು, ಹೊಗೆ, ರೊಟ್ಟಿ
೪೮. ಕಂಬ ಕಂಬದ ಮೇಲೆ ದಿಂಬ, ದಿಂಬದ ಮೇಲೆ ಲಾಗಲೂಟೆ, ಲಾಗಲೂಟೆ ಮೇಲೆ ಎರಡು ಹುಡ್ಗರು ಓಡ್ಯಾಡುತಾರೆ.-ಕಣ್ಣು.
೪೯. ಶತ್ತಗಿಂಡಿ, ಶಾರಾಗಿಂಡಿ, ನೀರಾಗಿ ಹಕ್ಕಿದರೆ ಮುಳುಗದು ಮುತ್ತಿನ ಗಿಂಡಿ.-ಬೆಣ್ಣೆ ಉಂಡೆ.
೫೦.ಕುತ್ತಿಗೆ ಇದೆ ತಲೆ ಇಲ್ಲ, ತೋಳಿದೆ ಬೆರಳಿಲ್ಲ, ದಡಾ ಇದೆ, ಕಾಲಿಲ್ಲ.-ಅಂಗಿ.
೫೧. ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ-ಮಲ್ಲಿಗೆ
೫೨. ಅಂಗೈ ಅಗಲದ ರೊಟ್ಟಿಗೆ ಲೆಕ್ಕವಿಲ್ಲದಷ್ಟು ಉಪ್ಪಿನಕಾಯಿ-ಆಕಾಶ, ನಕ್ಷತ್ರ
೫೩. ಸುಟ್ಟ ಹೆಣ ಮತ್ತೆ ಸುಡ್ತಾರೆ-ಇದ್ದಿಲು
೫೪. ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ- ಹಲಸಿನ ಹಣ್ಣು , ಬೀಜ
೫೫. ಅಂಗೈ ಕೊಟ್ಟರೆ ಮುಂಗೈನೂ ನುಂಗುತ್ತದೆ- ಬಳೆ
೫೬. ಒಂದು ಹಪ್ಪಳ ಊರಿಗೆಲ್ಲ ಊಟ- ಚಂದ್ರ
೫೭. ಆಕಾಶದಲ್ಲಿ ಕೊಡಲಿಗಳು ತೇಲಾಡುತ್ತವೆ- ಹುಣಸೇಹಣ್ಣು
೫೮. ನೀಲಿ ಕೆರೆಯಲಿ ಬಿಳಿ ಮೀನು-ನಕ್ಷತ್ರ
೫೯. ಒಂದು ತೇಲುತ್ತೆ ,ಒಂದು ಮುಳುಗುತ್ತೆ, ಒಂದು ಕರಗುತ್ತೆ.-ವಾರ,ತಿಂಗಳು,ವರ್ಷ
೬೦. ಬಾ ಅಂದರೆ ಬರೋಲ್ಲ , ಹೋಗು ಅಂದರೆ ಹೋಗೋಲ್ಲ-ಮಳೆ
೬೧. ನಾ ಇರುವಾಗ ಬರುತ್ತೆ , ನಾ ಹೋದ ಮೇಲೂ ಇರುತ್ತೆ-ಕೀರ್ತಿ
೬೨. ಬೆಳ್ಳಿ ಸಮುದ್ರದಲ್ಲಿ ಕಪ್ಪು ಸೂರ್ಯ-ಕಣ್ಣು
೬೩ ಅಕ್ಕನ ಮೇಲೆ ಛತ್ರಿ- ರೆಪ್ಪೆ
೬೪. ತಮ್ಮಂಗೆ ಮೂರು ಕಣ್ಣು ಅಮ್ಮಂಗೆ ಒಂದೇ ಕಣ್ಣು-ತೆಂಗಿನ ಕಾಯಿ
೬೫. ಅಕ್ಕ ಓದುತ್ತಾಳೆ ತಂಗಿ ನಡೀತ್ತಾಳೆ-ಕಣ್ಣು
೬೬.ಅಮ್ಮನ ಆಕಾಶವಾಣಿ ನಾನು-ಮಗು
೬೭. ಅಂಗಡಿಯಿಂದ ತರೋದು ಮುಂದಿಟ್ಟುಕೊಂಡು ಅಳೋದು-ಈರುಳ್ಳಿ
೬೮. ಅಂಗಣ್ಣ ಮಂಗಣ್ಣ ಅಂಗಿ ಬಿಚ್ಚಿಕೊಂಡು ನುಂಗಣ್ಣ- ಬಾಳೆಹಣ್ಣು
೬೯. ಗೂಡ್ನಲ್ಲಿರೋ ಜೋಡಿ ಪಕ್ಷಿ ಊರೆಲ್ಲ ನೋಡುತ್ತೆ-ಕಣ್ಣು
೭೦. ಒಂದು ಮಡಕೆ, ಮಡಕೆಯೊಳಗೆ, ಕುಡಿಕೆ, ಕುಡಿಕೆಯಲ್ಲಿ ಸಾಗರ-ತೆಂಗಿನ ಕಾಯಿ
೭೧. ನೀನಿಲ್ಲದೆ ಊಟವಿಲ್ಲ- ಉಪ್ಪು
೭೨. ಬಿಳಿ ಸರದಾರನಿಗೆ ಕರಿ ಟೋಪಿ-ಬೆಂಕಿಕಡ್ಡಿ
೭೩. ಕಾಲಿಲ್ದ ಹುಡುಗಿಗೆ ಮಾರುದ್ದ ಕಡಿವಾಣ - ಸೂಜಿ
೭೪. ಮೂರು ಕಾಸಿನ ಕುದುರೆಗೆ ಮುನ್ನೂರು ರೂಪಾಯಿನ ಹಗ್ಗ-ಹೇನು ಕೂದಲು
೭೫. ಕೆಂಪು ಕುದುರೆಗೆ ಲಗಾಮು, ಓಬ್ಬ ಹತ್ತುತ್ತಾನೆ , ಇನ್ನೊಬ್ಬ ಇಳಿತಾನೇ-ಬೆಂಕಿ,ಬಾಣಲೆ, ದೋಸೆ
೭೬ . ಒಂದು ಮನೆಗೆ ಒಂದೇ ತೊಲೆ-ತಲೆ
೭೭. ಕಂದ ಬಂದ ಕೊಂದ ತಂದ-ಶ್ರೀ ರಾಮ ಚಂದ್ರ
೭೮. ಕಲ್ಲಿಲ್ಲದ ಬೆಟ್ಟ ಮರಳಿಲ್ಲದ ಮರುಭೂಮಿ-ಭೂಪಟ
೭೯. ಚಿಕ್ಕಕ್ಕನಿಗೆ ಪುಕ್ಕುದ್ದ-ಸೌಟು
೮೦. ಎರಡು ಮನೆಗೆ ಒಂದೇ ದೂಲ-ಮೂಗು
೮೧. ನೀರಿರೋತಾವ ನಿಲ್ಲಲೇ ಕೋಣ-ಚಪ್ಪಲಿ
೮೨. ಹೋದ ನೆಂಟ, ಬಂದ ದಾರಿ ಗೊತ್ತಿಲ್ಲ-ನೆರಳು
೮೩. ಮರದೊಳಗೆ ಮರ ಹುಟ್ಟಿ ಮರ ಚಕ್ರ ಕಾಯಾಗಿ ತಿನ್ನಬಾರದ ಹಣ್ಣು ಬಲು ರುಚಿ-ಮನುಷ್ಯನ ಹುಟ್ಟು ಮಗು
೮೪. ಕಲ್ಲರಳಿ ಹೂವಾಗಿ, ಎಲ್ಲರಿಗೂ ಬೇಕಾಗಿ, ಮಲ್ಲಿಕಾರ್ಜುನನ ಗುಡಿಗೆ ಬೆಳಕಾಗಿ, ಬಲ್ಲವರು ಹೇಳಿ -ಸುಣ್ಣ
೮೫. ಚಿಣಿಮಿನಿ ಎನ್ನುವ ಕೆರೆ, ಚಿಂತಾಮಣಿ ಎನ್ನುವ ಹಕ್ಕಿ, ಕೆರೆ ಬತ್ತಿದರೆ ಹಕ್ಕಿಗೆ ಮರಣ -ದೀಪ
೮೬. ಹೋಗುತ್ತಾ, ಬರುತ್ತಾ ಇರುವುದು ಎರಡು,ಹೋದ ಮೇಲೆ ಬರಲಾರವು ಎರಡು-ಸಿರಿತನ-ಬಡತನ, ಪ್ರಾಣ -ಬಡತನ
೮೭. ಒಂದು ಹಸ್ತಕ್ಕೆ ನೂರೆಂಟು ಬೆರಳು-ಬಾಳೆಗೊನೆ
೮೮. ಎಲ್ಲರ ಮನೆ ಅಜ್ಜಿಗೆ ಮೈಯೆಲ್ಲಾ ಕಜ್ಜಿ -ಜರಡಿ
೮೯. ಎಂದರೆ ತೆರಿತಾವ, ಅಪ್ಪ ಎಂದರೆ ಮುಚ್ಚುತಾವ-ಬಾಯಿ
೯೦. ದಾಸ್ ಬುರುಡೆ ದೌಲಥ ಬುರುಡೆ, ಲೋಕಕ್ಕೆಲ್ಲ ಎರಡೇ ಬುರುಡೆ-ಸೂರ್ಯ , ಚಂದ್ರ
೯೧. ಅಪ್ಪ ಆಕಾಶಕ್ಕೆ ಅವ್ವ ಪಾತಾಳಕ್ಕೆ ಮಗ ವ್ಯಾಪಾರಕ್ಕೆ ಮಗಳು ಮದುವೆಗೆ -ಅಡಿಕೆ ಮರ
೯೨.ಹಾರಾಡುತ್ತಿದೆ ಗಾಳಿಪತವಲ್ಲ , ಬಣ್ಣ ಮೂರಿರುವುದು ಕಾಮನಬಿಲ್ಲಲ್ಲ-ಧ್ವಜ
೯೩. ನೀಲಿ ಸಾಗರದಲ್ಲಿ ಬೆಳ್ಳನೆ ಮೀನುಗಳು ನಾನ್ಯಾರು?-ತಾರೆಗಳು
೯೪. ಬಿಡಿಸಿದರೆ ಹೂವು, ಮದಚಿದರೆ ಮೊಗ್ಗು ,ಇದು ಏನು?-ಛತ್ರಿ
೯೫. ಆರು ಕಾಲು ಅಂಕಣ್ಣ ಮೂರು ಕಾಲು ದೊಂಕಣ್ಣ ಸದಾ ಮೀಸೆ ತಿರುವಣ್ಣ-ನೊಣ
೯೬. ಒಂಟಿಕಾಲಿನ ಕುಂಟ. ನಾನ್ಯಾರು?-ಬುಗರಿ
೯೭. ಕಪ್ಪು ಕಂಬಳಿ ನೆಂಟ ಎಲ್ಲವನು ನಾಶ ಮಾಡೋಕೆ ಹೊಂಟ-ಇಲಿ
೯೮. ಹಲ್ಲು ಹಾಕಿದರೆ ಹಾಲು ಕೆಡೋಲ್ಲ ಕಲ್ಲು ಹಾಕಿದರೆ ಕೆಡುತ್ತೇ-ಕಳ್ಳಿ
೯೯. ಕಾಡಿನಲ್ಲಿ ಹುಟ್ಟುವುದು ಕಾಡಿನಲ್ಲಿ ಬೆಳೆಯುವುದು ಕಡಿದಲ್ಲಿ ಕಂಪ ಸೂಸುವೆನು-ಶ್ರೀಗಂಧ
೧೦೦. ಹಸಿರು ಕೋಟೆ, ಬಿಳಿ ಕೋಟೆ, ಕೆಂಪಿನ ಕೋಟೆ ಈ ಕೋಟೆಯೊಳಗೆ ಕಪ್ಪು ಸಿಪಾಯಿಗಳು-ಪರಂಗಿ ಹಣ್ಣು
೧೦೧.ಒಂದು ಮನೆಯಲ್ಲಿ ಮೂರು ಜನ ಅಕ್ಕ-ತಂಗಿಯರಿದ್ದಾರೆ ಆದರೆ ಒಬ್ಬರ ಮುಖ ಕಂಡರೆ ಒಬ್ಬರಿಗೆ ಕಾಣೋಲ್ಲ- ಜಾದಳಕಾಯಿ
೧೦೨. ಅಂಕಡೊಂಕಿನ ಬಾವಿ ಹೊಕ್ಕು ನೋಡಿದ್ರೆ ಮುಕ್ಕ ನೀರಿಲ್ಲ-ಕಿವಿ
೧೦೩. ಕೆಂಪು ಕುದುರೆ ಕರಿ ತಡಿ ಒಬ್ಬ ಏರುತಾನೆ ಒಬ್ಬ ಇಳಿತಾನೆ-ರೊಟ್ಟಿ
೧೦೪. ಮೂರೂ ಪಕ್ಷಿಗಳು ಗೂಡಿಗೆ ಹೋಗುವಾಗ ಬೇರೆ ಬೇರೆ ಬಣ್ಣ ಬರುವಾಗ ಬಣ್ಣ-ಎಲೆ ಅದಿಕೆ
೧೦೫. ಆಕಾಶದೊಳಗಿನ ಗಿಣಿ ಊಟದ ಹೊತ್ತಿಗೆ ರಾಣಿ-ಬಾಳೆಲೆ
೧೦೬. ಎರಡು ಬಾವಿಗಳ ನಡುವೆಯೊಂದು ಸೇತುವೆ-ಮೂಗು
೧೦೭. ತಲೆ ಇಲ್ಲ , ನಡು ಇಲ್ಲ , ಕೈಗಳಿದ್ದರು ಬೆರಳಿಲ್ಲ-ಕೋಟು ಅಂಗಿ
೧೦೮. ತಿಂಡಿಗೆ ಕಡಿಮೆ ಇಲ್ಲ ,ತೀರ್ಥ ಕುಡಿದರೆ ಸಾವು -ವಿಷ
೧೦೯ . ಒಬ್ಬಳು ಮುಲುಗಿದಳು, ಒಬ್ಬಳು ಕರಗಿದಳು , ಒಬ್ಬಳು ತೇಲಿದಳು -ಅಡಿಕೆ , ಸುಣ್ಣ
೧೧೦.ಹೋಗೋದು ಮುಳುಗೋದು ತರೋದು ಏನು?-ಬಿಂದಿಗೆ
೧೧೧. ಕಿರೀಟ ಇದೆ ರಾಜ ಅಲ್ಲ, ಕಲ ತಿಳಿಸುತ್ತ್ತೆ ಗಡಿಯಾರವಲ್ಲ-ಕೋಳಿ
೧೧೨. ಒಂದು ಹಣ್ಣಿಗೆ ಹನ್ನೆರಡು ತೊಳೆ ಮತ್ತೂ ಮೂವತ್ತು ಬೀಜ-ವರ್ಷ
೧೧೩. ಗುಂಡಾಕಾರ ಮೈಯೆಲ್ಲಾ ತೂತು-ದೋಸೆ
೧೧೪.ಬಂಗಾರದ ಗುಬ್ಬಿ ಬಾಲದಲ್ಲೇ ನೀರನ್ನು ಕುಡಿಯುತ್ತೆ-ಚಿಮಿಣಿ
೧೧೫. ಒಂದು ಮರ , ಮರದಾಗ ಅಲ್ಲ, ಅಲ್ಲಿನಾಗ ಕೊಬ್ರಿ ಗುಂಡ-ಆಕಾಶ ನಕ್ಷತ್ರ ಚಂದ್ರ
೧೧೬. ಅನ್ನ ಮಾಡಲಿಕ್ಕೆ ಬಾರದಂತಹ ಅಕ್ಕಿ ಯಾವುದು-ಏಲಕ್ಕಿ
೧೧೭. ಬೆಳ್ಳಿ ಬಟ್ಟಲಲ್ಲಿ ಮುತ್ತಿನ ಬಿಂದು-ತಾರೆ
೧೧೮. ಲಟಪಟ ಲೇಡಿಗೆ ಒಂದೇ ಕಣ್ಣು-ಸೂಜಿ
೧೧೯. ಹಸಿರು ಕೋಲಿಗೆ ಮುತ್ತಿನ ತುರಾಯಿ-ಜೋಳದ ತೆನೆ
೧೨೦. ಬಿಳಿ ಹುಲ್ಲಲ್ಲಿ ಕೆಂಪು ಕುರಿಮರಿ-ನಾಲಿಗೆ
೧೨೧. ಸೂಜಿ ಸಣ್ಣಕಾಗೆ ಬಣ್ಣ -ಕೂದಲು
೧೨೨. ಹೋದರು ಇರುತ್ತೆ ಬಂದರೂ ಕಾಡುತ್ತೆ.ಇದು ಏನು?-ನೆನಪು
೧೨೩. ಆರು ಕಾಲಿನ ಆನೆ, ಆನೆ ತಿನ್ನುತ್ತೆ ನೀರು ಕುಡಿಯಲ್ಲ-ನುಸಿ
೧೨೪. ಊರಿಗೆಲ್ಲ ಒಂದೇ ಕಂಬಳಿ-ಆಕಾಶ
೧೨೫. ಅಟ್ಟದ ಮೇಲೆ ಪುಟ್ಟ ಲಕ್ಷ್ಮಿ-ಕುಂಕುಮ
೧೨೬. ಕರಿ ಹೊಲದ ಮದ್ಯದಲ್ಲಿ ಬೇಲಿ ದಾರಿ-ಬೈತಲೆ
೧೨೭. ಒಂದು ಬತ್ತಿ ಮನೆಯೆಲ್ಲ ಬೆಳಕು-ಸೂರ್ಯ
೧೨೮.ಕಣ್ಣಿಗೆ ಕಾಣೋದಿಲ್ಲ, ಕೈಗೆ ಸಿಗೋದಿಲ್ಲ -ಗಾಳಿ
೧೨೯. ಕಣ್ಣಿಗೆ ಹತ್ತಿರ ಕಾಲಿಗೆ ದೂರ-ಬೆಟ್ಟ
೧೩೦. ಊಟಕ್ಕೆ ಮೊದಲು ನಾನು ಅಂತ ಬರುತ್ತೆ -ಬಾಳೆ ಎಲೆ , ತಟ್ಟೆ
೧೩೧. ಹಸಿರು ಮೈ ಹಳದಿ ಮೈ ಪೇಟೇಲಿ ಕುಳಿತು ಎಲ್ಲರನ್ನು ಕರೆಯುತ್ತೆ-ಮಾವು
೧೩೨. ಹುಲಿಯ ಚಿಕ್ಕಮ್ಮ , ಇಲಿಯ ಮುಕ್ಕಮ್ಮ-ಬೆಕ್ಕು
೧೩೩. ಕೂಗಿದರೆ ರಾವಣ, ಹಾರಿದರೆ ಹನುಮಂತ, ಕೂತರೆ ಮುನಿ-ಕಪ್ಪೆ
೧೩೪. ಕಲ್ಲಲ್ಲಿ ಹುಟ್ಟುವುದು, ಕಲ್ಲಲ್ಲಿ ಬೆಳೆಯುವುದು, ನೆತ್ತಿಯಲ್ಲಿ ಕುತಗುಟ್ಟುವುದು-ಸುಣ್ಣ
೧೩೫. ಕಾಂತಾಮಣಿ ಎಂಬ ಪಕ್ಷಿ, ಚಿಂತಾಮಣಿ ಎಂಬ ಕೆರೆ, ಕೆರೆಯಲ್ಲಿ ನೀರಿಲ್ದೆ ಹೋದ್ರೆ ಪಕ್ಷಿಗೆ ಮರಣ-ದೀಪ
೧೩೬. ಕಲ್ಲು ತುಳಿಯುತ್ತೆ, ಮುಳ್ಳು ಮೆಯುತ್ತೆ, ನೀರು ಕಂಡ್ರೆ ನಿಲ್ಲುತ್ತೆ-ಚಪ್ಪಲಿ
೧೩೭. ಕಾಲಿಲ್ಲದೇ ನಡೆಯುವುದು, ತಲೆ ಎಲ್ಲಡೆ ನುಡಿಯುವುದು, ಮೇಲು ಕೆಳಗಾಗಿ ಓದುವುದು-ನದಿ
೧೩೮. ಜಂಬು ನೇರಳೆ ಮರ, ಎಳೆದರೆ ನಾಲ್ಕು ಬಾವಿ ನೀರು ಒಂದೇ ಆಗುತ್ತದೆ-ಮೇಡು
೧೩೯. ಇಡೀ ಮನೆಗೆಲ್ಲ ಒಂದೇ ಕಂಬಳಿ, ಬಾಯಿ ತೆರೆದರೆ ಮೂಗು ಮುಚ್ಚುತ್ತಿ-ಆಕಾಶ
೧೪೦. ಒಂದು ಕಾಲಿನ ಪಕ್ಷಿಗೆ ಒಂಭತ್ತು ರೆಕ್ಕೆ, ಒಂದೇ ಕಾಲಲಿ ನಿಂತು ನೂರಾರು ಮೊಟ್ಟೆ ಇಡುತ್ತದೆ-ಜೋಳದ ದಂಟು.
೧೪೧. ಎತ್ತ ಹೋದರು ಕುತ್ತಿಗೆಗೆ ಕೈ ಹಾಕುತ್ತಾರೆ! ನಾನ್ಯಾರು?-ಸಾಲಿಗ್ರಾಮ
೧೪೨. ಕರಿ ಹುಡುಗನಿಗೆ ಬಿಳಿ ಟೋಪಿ -ಹೆಂಡದ ಮಡಿಕೆ
೧೪೩. ಬಿಳಿ ಆಕಾಶದಲ್ಲಿ ಕಪ್ಪು ನಕ್ಷತ್ರಗಳು,ಇದನ್ನು ನೋಡಲು ಜನ ಕಾದಿಹರು-ನಾಣ್ಯ
೧೪೪. ಗೋಡೆ ಗುದ್ದಪ್ಪ ನೀನಿದ್ದಲ್ಲಿ ನಿದ್ದೆ ಇಲ್ಲಪ್ಪ.-ತಿಗಣೆ
೧೪೫. ಕುದುರೆ ಬಾಲದಿಂದ ನೀರು ಕುಡಿಯುತ್ತದೆ-ಹೇನು
೧೪೬. ಬಿಳಿ ಸಾಮ್ರಾಜ್ಯದಲ್ಲಿ ಕಪ್ಪು ಪ್ರಜೆಗಳು.-ಸೀತ ಫಲ
೧೪೭. ಅಣ್ಣ ಅತ್ತರೆ ತಮ್ಮನೂ ಅಳುತ್ತಾನೆ.-ಕಣ್ಣು
೧೪೮. ಮನೆ ಮೇಲೆ ಮಲ್ಲಿಗೆ ಹೂವು.-ಮಂಜು
೧೪೯. ಹಾರಿದರೆ ಹನುಮಂತ ಕೂಗಿದರೆ ಶಂಖ.-ಕಪ್ಪೆ
೧೫೦. ನೋಡಿದರೆ ಕಲ್ಲು ನೀರು ಹಾಕಿದರೆ ಮಣ್ಣು.-ಸುಣ್ಣ
೧೫೧.ಸುದ್ದಿ ಸೂರಪ್ಪ ದೇಶವೆಲ್ಲಾ ಸುತ್ತಾಡ್ತಾನೆ.-ಪೋಸ್ಟ್ ಕಾರ್ಡ್
೧೫೨. ಬಿಳಿ ಕುದುರೆಗೆ ಹಸಿರು ಬಾಲ.-ಮೂಲಂಗಿ
೧೫೩. ಚಿಕ್ಕ ಬೆಟ್ಟದಲ್ಲಿ ಪುಟ್ಟ ಚಂದ್ರ.-ಕುಂಕುಮ
೧೫೪. ಬರೋದ ಕಂಡು ಕೈ ಒಡ್ತಾರೆ.-ಬಸ್
೧೫೫. ಹತ್ತಾರು ಮಕ್ಕಳ ತಂದೆ ಅದಕ್ಕೆ ತಲೆಯ ಮೇಲೆ ಜುಟ್ಟು-ಹುಂಜ
೧೫೬. ಹಸಿರು ಮುಖಕ್ಕೆ ವಿಪರೀತ ಕೋಪ , ಕೋಪ ಮಾಡಿಕೊಳ್ಳದೆ ನಾನ್ಯಾರೆಂದು ಹೇಳಿ?-ಮೆಣಸಿನಕಾಯಿ
೧೫೭. ಅಜ್ಜಿ ಗುದ್ದಿದರೆ ಮನೆಯೆಲ್ಲ ಮಕ್ಕಳು ಈಗ ಹೇಳಿ ನಾನ್ಯಾರು-ಬೆಳ್ಳುಳ್ಳಿ
೧೫೮. ಹಗಲಲ್ಲಿ ಮಾಯಾ ರಾತ್ರಿಯಲ್ಲಿ ಪ್ರತ್ಯಕ್ಷ ?ನಾನ್ಯಾರು ಹೇಳಿ?-ನಕ್ಷತ್ರ
೧೫೯.ಹಗ್ಗ ಹಾಸಿದೆ ಕೋಣ ಮಲಗಿದೆ-ಕುಂಬಳಕಾಯಿ, ಬಳ್ಳಿ
೧೬೦. ನನ್ನ ಕಂಡರೆ ಎಲ್ಲರು ಓದೀತಾರೆ -ಚೆಂಡು
೧೬೧. ಹಳ್ಳಿ ಗಡಿಯಾರ, ಒಳ್ಳೆ ಆಹಾರ-ಕೋಳಿ
ಚಿಣ್ಣರ ಹಾಡುಗಳ ಸಂಗ್ರಹ
ಒಂದು ಎರಡು
ಒಂದು ಎರಡು
ಬಾಳೆಲೆ ಹರಡು
ಮೂರು ನಾಕು
ಅನ್ನ ಹಾಕು
ಐದು ಆರು
ಬೇಳೆ ಸಾರು
ಏಳು ಎಂಟು
ಪಲ್ಯಕೆ ದಂಟು
ಒಂಬತ್ತು ಹತ್ತು
ಎಲೆ ಮುದಿರೆತ್ತು
ಒಂದರಿಂದ ಹತ್ತು ಹೀಗುತ್ತು
ಊಟದ ಆಟವು ಮುಗಿದಿತ್ತು
ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು
ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು
ಎತ್ತಿಕೊಳಲು ಹೋದರದಕೆ ಕೋಪ ಬರುವುದು
ಕೋಪ ಬರಲು ಗಟ್ಟಿಯಾಗಿ ಕಿರಿಚಿಕೊಳುವುದು
ಕಿರಿಚಿಕೊಂಡು ತನ್ನ ಮೈಯ ಪರಚಿಕೊಳುವುದು
ಮೈಯ ಪರಚಿಕೊಂಡು ಪಾಪ ಅತ್ತು ಕರೆವುದು
ಅಳಲು ಕಣ್ಣಿನಿಂದ ಸಣ್ಣ ಮುತ್ತು ಸುರಿವುದು
ಪಾಪ ಅತ್ತರಮ್ಮ ತಾನೂ ಅತ್ತುಬಿಡುವಳು
“ಅಯ್ಯೋ ಪಾಪ” ಎಂದುಕೊಂಡು ಮುತ್ತು ಕೊಡುವಳು
ಪಾಪ ಪಟ್ಟು ಹಿಡಿದ ಹಟವು ಸಾರ್ಥಕವಾಯಿತು
ಕಿರಿಚಿ ಪರಚಿ ಅಳುವುದೆಲ್ಲ ಅರ್ಥವಾಯಿತು
ಕವಿ – ಕುವೆಂಪು
ಗುಂಡ
ಉಂಡಾಡಿ ಗುಂಡ
ಅಜ್ಜಿ ಮನೇಗೆ ಹೋದ
ಎಂಟು ಲಾಡು ತಿಂದ
ಹೊಟ್ಟೆ ನೋವು ಎಂದ
ಕೈ ಕಟ್ ಬಾಯ್ ಮುಚ್
ನಾಯಿಮರಿ ನಾಯಿಮರಿ ತಿಂಡಿ ಬೇಕೆ
ನಾಯಿಮರಿ ನಾಯಿಮರಿ ತಿಂಡಿ ಬೇಕೆ
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು
ನಾಯಿಮರಿ ನಿನಗೆ ತಿಂಡಿ ಯಾಕೆ ಬೇಕು
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು
ನಾಯಿಮರಿ ಕಳ್ಳ ಬಂದರೆ ಎನು ಮಾಡುವೆ
ಲೊಳ್ ಲೊಳ್ ಬೊವ್ ಎಂದು ಕೂಗಿ ಆಡುವೆ
ಜಾಣಮರಿ ತಾಳು ಹೋಗಿ ತಿಂಡಿ ತರುವೆನು
ತಾ ನಿನ್ನ ಮನೆಯ ನಾನು ಕಾಯುತಿರುವೆನು
ಕವಿ : ಜಿ.ಪಿ.ರಾಜರತ್ನಂ
ಬಹಳ ಒಳ್ಳೆ ನಮ್ಮಿಸ್ಸು
ಏನ್ ಹೇಳಿದ್ರು ಎಸ್ಸೆಸ್ಸು
ನಗ್ತಾ ನಗ್ತಾ ಮಾತಾಡ್ತಾರೆ
ಸ್ಕೂಲಿಗೆಲ್ಲ ಫೇಮಸ್ಸು
ಒಂದು ಕಾಡಿನ ಮಧ್ಯದೊಳಗೆ
ಎರಡು ಮರಗಳ ನಡುವೆ ಕೂತು
ಮೂರು ಕರಡಿಗಳಾದುತಿದವು
ನಾಲ್ಕು ಮರಿಗಳ ಸೇರಿಸಿ
ಐದು ಜನರಾ ಬೇಟೆಗಾರರು
ಆರು ಬಲೆಗಳ ಹೊತ್ತು ತಂದು
ಏಳು ಕರಡಿಗಳಿಡಿದರು
ಎಂಟು ಅಂದನು ಅದರಲೊಬ್ಬ
ಒಂಭತ್ತು ಎಂದನು ಬೇರೆಯವನು
ಹತ್ತು **********
ಇಲ್ಲಿಗೆ ಕಥೆ ಮುಗಿಯಿತು
ಅಣ್ಣನು ಮಾಡಿದ ಗಾಳಿಪಟ
ಬಣ್ಣದ ಹಾಳೆಯ ಗಾಳಿಪಟ
ನೀಲಿಯ ಬಾನಲಿ ತೇಲುವ ಸುಂದರ
ಬಾಲಂಗೊಸಿಯ ನನ್ನ ಪಟ
ಬಿದಿರಿನ ಕಡ್ಡಿಯ ಗಾಳಿಪಟ
ಬೆದರದ ಬೆಚ್ಚದ ಗಾಳಿಪಟ
ದಾರವ ಜಗ್ಗಿ
ದೂರದ ನಗಿಸುವ ನನ್ನ ಪಟ
ನಮ್ಮ ಪುಟ್ಟ
ಬಹಳ ದಿಟ್ಟ
ನಾಯಿ ಬಾಲ ಜಗ್ಗಿದ
ಬೌ ಬೌ ಬೊಗಳಿದಷ್ಟು
ಅವನು ತುಂಬ ಹಿಗ್ಗಿದ
ಪುಟ್ಟ ಮರಿ ಜಾಣ ಮರಿ
ಎಲ್ಲಿ ಓಡುವೆ?
ಪುಟ್ಟ ಕಣ್ಣು ಅರಳಿಸಿ
ನೀನೇನು ನೋಡುವೆ
ಮುದ್ದು ಕಿವಿ ನಿಮಿರಿಸಿ
ನೀನೇನು ಕೇಳುವೆ
ಅಲ್ಲಿ ಇಲ್ಲಿ ನೋಡಿ
ಚಂಗನೆದ್ದು ಜಿಗಿಯುವೆ
ನನ್ನ ಕೈಗೆ ಸಿಗದೆ
ಏಕೆ ಹೀಗೆ ಕಾಡುವೆ
ಮುದ್ದು ಮರಿ ಮೇಕೆ ಮರಿ
ಎಲ್ಲಿ ನೀನು ಓಡುವೆ
ನನ್ನ ಜೊತೆಗೆ ಆಡು ನೀನು
ನಿನ್ನ ಮುದ್ದು ಮಾಡುವೆ
ನನ್ನಯ ಬುಗುರಿ ಬಣ್ಣದ ಬುಗುರಿ
'ಗುರು ಗುರು' ಸದ್ದನು ಮಾಡುವ ಬುಗುರಿ
ಜಾಳಿಗೆ ಸುತ್ತಿ ಕೈಯನು ಎತ್ತಿ
ಬೀಸಲು ಭರದಿ ಸುತ್ತುವ ಬುಗುರಿ
ಹೊಡೆತಕೆ ಅಂಜದೆ ಕೆಚ್ಚೆದೆಯಿಂದಲಿ
'ಗಿರಿ ಗಿರಿ' ತಿರುಗುವ ಮೆಚ್ಚಿನ ಬುಗುರಿ
ಅಂಗೈ ಮೇಲೆ ಆಡುವ ಬುಗುರಿ
ಕಚಗುಳಿಯಿಕ್ಕುವ ಮೋಜಿನ ಬುಗುರಿ
ಕಾಮನ ಬಿಲ್ಲನು ಭೂಮಿಗೆ ಇಳಿಸಿ
'ಗರ ಗರ' ಸುತ್ತುವ ಬಣ್ಣದ ಬುಗುರಿ
ಆನೆ ಬಂತೊಂದಾನೆ ಯಾವೂರಾನೆ?
ಚನ್ನಪಟ್ಣದಾನೆ ಇಲ್ಲಿಗ್ಯಾಕೆ ಬಂತು?
ಮಕ್ಳನ್ನೋಡಕ್ ಬಂತು ಏನೇನ್ ತಂತು?
ಕೊಬ್ರಿ ಬೆಲ್ಲ ತಂತು ಮಕ್ಕಳ್ಗೆಲ್ಲ
ಹಂಚಿ ಓಡಿಹೋಯ್ತು ಆನೆ
ಚೈತ್ರ ವೈಶಕ - ವಸಂತ ಋತು
ಜ್ಯೇಷ್ಠ ಆಷಾಡ - ಗ್ರೀಷ್ಮ ಋತು
ಶ್ರವಣ ಭ್ರಾದ್ರಪದ - ವರ್ಷದ ಋತು
ಅಷ್ವಿಜ ಕಾರ್ತಿಕ - ಶರದ್ ಋತು
ಮಾರ್ಗಶಿರ ಪುಷ್ಯ - ಹೇಮಂತ ಋತು
ಮಾಗ ಪಾಲ್ಗುಣ - ಶಿಶಿರ ಋತು
ರತ್ತೋ ರತ್ತೋ ರಾಯನ ಮಗಳೇ
ಬಿತ್ತೋ ಬಿತ್ತೋ ಭೀಮನ ಮಗಳೇ
ಆದಿನಾರೆಮ್ಮೆ ಕಾಸಲಾರೆ
ಬೈಟು ಗುಬ್ಬಿ ಬಾಲೆ ಕಂಬ
ಕುಕ್ಕರ ಬಸವಿ ಕೂರೆ ಬಸವಿ || 2 ||
ಅಣ್ಣನು ಮಾಡಿದ ಗಾಳಿಪಟ
ಬಣ್ಣದ ಹಾಳೆಯ ಗಾಳಿಪಟ
ನೀಲಿಯ ಬಾನಲಿ
ತೇಲುವ ಸು೦ದರ
ಬಾಲ೦ಗೋಸಿಯ ನನ್ನ ಪಟ
ಬಿದಿರಿನ ಕಡ್ಡಿಯ ಗಾಳಿಪಟ
ಬೆದರದ ಬೆಚ್ಚದ ಗಾಳಿಪಟ
ದಾರವ ಜಗ್ಗಿ
ದೂರದ ನಗಿಸುವ ನನ್ನ ಪಟ
ಅಚ್ಚಚ್ಚು ಬೆಲ್ಲದಚ್ಚು
ಅಲ್ಲಿ ನೋಡು ಇಲ್ಲಿ ನೋಡು
ಸಂಪಿಗೆ ಮರದಲಿ ಗುಂಪು ನೋಡು
ಯಾವ ಗುಂಪು?
ಕಾಗೆ ಗುಂಪು
ಯಾವ ಕಾಗೆ?
ಕಪ್ಪು ಕಾಗೆ
ಯಾವ ಕಪ್ಪು?
ಇಜ್ಜಿಲ್ ಕಪ್ಪು
ಯಾವ ಇಜ್ಜಿಲು ?
ಸೌದೆ ಇಜ್ಜಿಲು
ಯಾವ ಸೌದೆ ?
ಒಲೆ ಸೌದೆ
ಯಾವ ಒಲೆ ?
ರೊಟ್ಟಿ ಒಲೆ
ಯಾವ ರೊಟ್ಟಿ?
ತಿನ್ನೋ ರೊಟ್ಟಿ
ಯಾವ ತಿನ್ನೋ?
ಹೇಟು ತಿನ್ನೋ
ಯಾವ ಹೇಟು ?
ದೊಣ್ಣೆ ಹೇಟು
ಯಾವ ದೊಣ್ಣೆ ?
ದಪ್ಪ ದೊಣ್ಣೆ
ಯಾವ ದಪ್ಪ ?
ನಿನ್ನ ಹೊಟ್ಟೆ ದಪ್ಪ Big Laugh
ಮಳೆ ಬಂತು ಮಳೆ
ಕೊಡೆ ಹಿಡಿದು ನಡೆ
ದಾರಿಯಲ್ಲಿ ಜಾರಿಬಿದ್ದು
ಬಟ್ಟೆಯಲ್ಲ ಕೊಳೆ
ಬಿಸಿಲು ಬಂತು ಬಿಸಿಲು
ಕೋಟು ಟೋಪಿ ತೆಗೆ
ಬಾವಿಯಲ್ಲಿ ನೀರು ಸೇದಿ
ಸೋಪು ಹಾಕಿ ಒಗೆ